
13th February 2025
ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ
ಕರ್ನಾಟಕ ಸರ್ಕಾರ ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯ ಹಾಗೂ ಪ್ರಾದೇಶಿಕ ಎನ್ಎಸ್ಎಸ್ ನಿರ್ದೇಶನಾಲಯ ಶೇಷಾದ್ರಿಪುರಂ, ಬೆಂಗಳೂರು ಹಾಗೂ ಪ್ರಥಮ ದರ್ಜೆ ಕಾಲೇಜು, ಯಲಹಂಕ ಇವರ ಸಹಯೋಗದಲ್ಲಿ ದಿನಾಂಕ 11/02/2025 ರಿಂದ 17/02/2025 ರವಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಭಾವೈಕ್ಯದ ಶಿಬಿರಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಿಂದ ಆಯ್ಕೆಯಾದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಎನ್ಎಸ್ಎಸ್ ಸ್ವಯಂಸೇವಕ ತುಕಾರಾಮ ರಮೇಶ ಗೌಡರ ಇವರಿಗೆ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಎಂ . ಜಿ. ಹೆಗಡೆ ಹಾಗೂ ಎನ್ ಎಸ್ ಎಸ್ ಅಧಿಕಾರಿಗಳಾದ ಲಖತ್ ಅತ್ತಾರ ಮತ್ತು ರೇಣುಕಾ ಜುಂಜವಾಡಕರ ಹಾಗೂ ಸಿಬ್ಬಂದಿವರ್ಗ ಅಭಿನಂದಿಸಿದರು.